BANANJE GOVINDACHARYA PRATISHTANA-TRUSTEES

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಪರಿಚಯ, ಅದರ ಕೆಲಸ ಕಾರ್ಯಗಳು ಮತ್ತು ಅದರ ಆರ್ಥಿಕ ವ್ಯವಸ್ಥೆಯ ವಿವರಗಳು

ಇದು ವಾಸ್ತವಿಕ ಐದು ಜನರ ಒಂದು ಟ್ರಸ್ಟ್

2015 ರಲ್ಲಿ ಇದನ್ನು ಬನ್ನಂಜೆ ಎಂಬತ್ತರ ಸಂಭ್ರಮದ ಉದ್ದೇಶಕ್ಕಾಗಿ ಸ್ಥಾಪಿಸಲಾಯಿತು

ಕಾರ್ಯಕ್ರಮಕ್ಕೆ ಅಂದಾಜು ಇಪ್ಪತ್ತೆಂಟು ಲಕ್ಷ ಧನಸಂಗ್ರಹ ಮಾಡಿ ಐದು ದಿನಗಳ ವೈಭವದ ಕಾರ್ಯಕ್ರಮ ಮುಗಿಸಿ, ನಾಲ್ಕು ಲಕ್ಷ ಹಣ ಉಳಿದಿತ್ತು. ಅದನ್ನು ಅಭಿಮಾನಿಗಳು ಕೊಟ್ಟ ಕಾಣಿಕೆ ಎಂದು ಅಪ್ಪನಿಗೆ ಸಲ್ಲಿಸಲು ಹೋದಾಗ ಪ್ರತೀ ವರ್ಷ ನನ್ನ ಹೆಸರಿನಲ್ಲಿ ಒಬ್ಬ ಸಂಸ್ಕೃತ ವಿದ್ವಾಂಸರಿಗೆ ಸನ್ಮಾನ ಮಾಡಿ, ಗೌರವ ಧನ ಕೊಡಿ ಎನ್ನುವಲ್ಲಿಂದ ವರ್ಷವೂ ಕಾರ್ಯಕ್ರಮ ಮಾಡುವ ಹೊಸ ಜವಾಬ್ದಾರಿ ಆರಂಭವಾಯಿತು. ಅಂದಿನಿಂದ ಪ್ರತಿಷ್ಠಾನ ವರ್ಷಕ್ಕೆ ಎರಡು ಕಾರ್ಯಕ್ರಮ ಮಾಡುತ್ತಾ ಬಂದಿದೆ

ಒಬ್ಬ ವಿದ್ವಾಂಸರ ಸನ್ಮಾನ ಒಂದು ಕಾರ್ಯಕ್ರಮದ ಆಕರ್ಷಣೆ ಆದರೆ, ಒಬ್ಬ ವಿಶೇಷ ವಿದ್ವಾಂಸರು, ಅವಧೂತರು,ಅಥವಾ ಸಾಧಕರನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಇದು ಇನ್ನೊಂದು ಕಾರ್ಯಕ್ರಮದ ಮುಖ್ಯ ಕೇಂದ್ರ. ಎರಡೂ ಕಾರ್ಯಕ್ರಮ ಅಪ್ಪನ ಉಪಸ್ಥಿತಿಯಲ್ಲಿ ನಡೆಯುತ್ತಿತ್ತು.

 

ವೀಣಾ ಬನ್ನಂಜೆ ಇದರ ಪ್ರಧಾನ ಟ್ರಸ್ಟಿ

ನಾಲ್ವರು ಪ್ರಸ್ತುತ ಫೌಂಡರ್ ಟ್ರಸ್ಟಿ

ಮಲ್ಲೇಪುರಂ ಜಿ ವೆಂಕಟೇಶ್

ಬದರಿನಾಥ್ ಎಸ್

ಯದುನಾಥ ಎಸ್ ಜಿ 

ಕವಿತಾ ಉಡುಪ 

 

ಕಾರ್ಯಕ್ರಮಗಳಿಗೆ ಅನುಗುಣವಾಗಿ ಹೊಸ ಹೊಸ ಸಮಿತಿಯನ್ನು ಮೇಲಿನ ಐವರು ರಚಿಸುತ್ತಾರೆ. ಹಾಗೆ ಕೆಲಸಗಳನ್ನು ದಾನ, ದೇಣಿಗೆ, ವಂತಿಗೆ ಮತ್ತು ಸದಸ್ಯತ್ವಗಳ ಹಣದ ಮೂಲಕ ನಡೆಸಲಾಗುವುದು.

ನಮ್ಮ ಸಂಸ್ಥೆಯ ಗೌರವಾಧ್ಯಕ್ಷರಾಗಿ

ಶ್ರೀ ಲಕ್ಷ್ಮೀಶ ತೋಳ್ಪಾಡಿ 

ಶ್ರೀ ವಿದ್ಯಾಭೂಷಣರು .

ಸಂಸ್ಥೆ ಆರಂಭ ಆಗಿ ಆರು ವರ್ಷಗಳು ಆದುವು. ಅಪ್ಪನ ಹುಟ್ಟಿದ ದಿನ ಮತ್ತು ಇನ್ನೊಂದು ಕಾರ್ಯಕ್ರಮವನ್ನು ಅಂದಿನಿಂದ ಅಪ್ಪನ ಉಪಸ್ಥಿತಿಯಲ್ಲಿ ನಡೆಸಿಕೊಂಡು ಬಂದಿದ್ದೇವೆ. ಅವರು ಇದ್ದಾಗಲೇ ವರ್ಷಕ್ಕೆ ಒಬ್ಬ ಸಂಸ್ಕೃತ ವಿದ್ವಾಂಸರನ್ನು ರೂ 25ಸಾವಿರ ಮೊತ್ತದೊಂದಿಗೆ ಬನ್ನಂಜೆ ಪುರಸ್ಕಾರ ಎಂಬ ಪ್ರಶಸ್ತಿ ಕೊಟ್ಟು ಸನ್ಮಾನಿಸುತ್ತಿದ್ದೆವು. (ಈಗಾಗಲೇ ಮೂವರನ್ನು ಗೌರವಿಸಿದ್ದೇವೆ) ಅದನ್ನು ಇನ್ನು ಕೂಡ ಮುಂದುವರಿಸುತ್ತೇವೆ

ಹಾಗೆಯೇ ಅಪ್ಪ ಉಪಸ್ಥಿತರಿದ್ದ ಪ್ರತಿಷ್ಠಾನದ ಎರಡು ಸಭೆಗಳಲ್ಲಿ  ಬನ್ನಂಜೆ ಅಧ್ಯಯನ ಕೇಂದ್ರ ಸ್ಥಾಪಿಸುವುದಾಗಿ ಪ್ರಸ್ತಾವಿಸಿದ್ದೆವು. ಅಪ್ಪ ಅದಕ್ಕೆ ಅನುಮತಿಸಿದ್ದರು. ದೂರ ಎಲ್ಲಾದರೂ ಆರಣ್ಯಕದಂಥಲ್ಲಿ ಮಾಡಿ ಎಂದಿದ್ದರು. ಅದೀಗ ಸುರೇಶ್ ಅವರ ಪ್ರೋತ್ಸಾಹದಿಂದ ಆರಣ್ಯಕದಲ್ಲಿಯೇ ಬೃಹದಾರಣ್ಯಕ ಎಂಬ ಹೆಸರಲ್ಲಿ ಪ್ರಾರಂಭಗೊಂಡಿದೆ. 3.8.21 ರಂದು ಅಪ್ಪನ ಹುಟ್ಟಿದ ದಿನ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

ಅಲ್ಲಿ ಇನ್ನು ಮುಂದೆ 

  1. ಸಂಸ್ಕೃತ ಭಾಷಾ ಶಿಬಿರ
  2. ವೇದ ಪಠನ ತರಬೇತಿ ಶಿಬಿರ
  3. ಬನ್ನಂಜೆ ಓದು : ಅವರ ಸಂಸ್ಕೃತ ಗ್ರಂಥಗಳ ಕುರಿತು ಕಾರ್ಯಾಗಾರ
  4. 4.ಬನ್ನಂಜೆ ಓದು : ಅವರ ಕನ್ನಡ ಕೃತಿಗಳ ಕುರಿತು ಕಾರ್ಯಾಗಾರ
  5. ಬನ್ನಂಜೆ ಪ್ರವಚನ : ಅವರ ಒಂದು ನಿರ್ದಿಷ್ಟ ವಿಷಯದ ಪ್ರವಚನವನ್ನು ಕೇಳುವ ಮತ್ತು ಕುರಿತು ಜಿಜ್ಞಾಸೆಯನ್ನು ಉಳ್ಳ ಕಾರ್ಯಾಗಾರ

ವರ್ಷದಲ್ಲಿ ಎರಡು ಬಾರಿ ವಿಶೇಷ ಸಾಧಕರು ಅಥವಾ ಅವಧೂತರ ಜೊತೆ ಬೃಹದಾರಣ್ಯಕದಲ್ಲಿ  ಸತ್ಸಂಗವನ್ನು ಕೂಡ ನಮ್ಮ ಪ್ರತಿಷ್ಠಾನ ಏರ್ಪಡಿಸುತ್ತದೆ.

ಮತ್ತು ಕನಕ ಜಯಂತಿ ದಿನ ಪ್ರತಿಷ್ಠಾನ ಕನಕೋಪನಿಷತ್ ಎಂಬ ಅಪ್ಪನ ಕೃತಿಯ ಹೆಸರಿನಲ್ಲಿ ಕನಕದಾಸರ ಕುರಿತು ಕಾರ್ಯಕ್ರಮ ನಡೆಸುತ್ತದೆ

ಇದಲ್ಲದೇ ಅವರಿಗೆ ಪ್ರಿಯವಾದ ಸಂಗೀತ, ನಾಟ್ಯ, ಚಿತ್ರಕಲೆ, ನಾಟಕ,ಯಕ್ಷಗಾನ ಮುಂತಾದವುಗಳ ಪ್ರದರ್ಶನ

ಆದಷ್ಟು ಅವರದೇ ರಚನೆಯ ನಾಟಕಗಳ ರಂಗಪ್ರದರ್ಶನ.

ಇವಿಷ್ಟು ಅಲ್ಲದೇ ಬನ್ನಂಜೆ ಗೋವಿಂದಾಚಾರ್ಯರ ಅಧ್ಯಯನಕ್ಕೆ ಬೇಕಾದ ಕೃತಿಗಳನ್ನು ಮತ್ತು ಅವರ ಪ್ರವಚನಗಳನ್ನು ಕೇಳಲು ಬೇಕಾಗುವ ಪುಸ್ತಕ ಮತ್ತು ಆಡಿಯೊ ವಿಡಿಯೋಗಳ ವ್ಯವಸ್ಥೆಯನ್ನು ಮಾಡಿಕೊಡುವುದು. ಅಧ್ಯಯನ ಆಕಾಂಕ್ಷಿಗಳಿಗೆ ಪೂರಕ ಮಾಹಿತಿ ಮತ್ತು ಮಾರ್ಗದರ್ಶನಗಳನ್ನು ಒದಗಿಸುವುದು.